Tuesday, March 16, 2010

ಪ್ರಗತಿಪಥದೆಡೆಗೆ...

ನಮ್ಮ ರಾಜಕಾರಣಿಗಳು ಯಾವುದೇ ಕೆಲಸವನ್ನು ನೆಟ್ಟಗೆ ಮಾಡುತ್ತಾ ಇಲ್ಲ, ಎಲ್ಲ ಕಡೆ ಬ್ರಷ್ಟಾಚಾರ ಎಂಬ ಕಾಳಿಂಗ ಸರ್ಪ ಹೆಡೆಯೆತ್ತಿ ನಿಂತಿದೆ, ಯಾವುದೇ ಕಾರ್ಯವಾಗಲಿ ಪ್ರಗತಿ ಪಥದಲ್ಲಿ ಸಾಗುತ್ತಿಲ್ಲ, ಎಲ್ಲ ಕೆಲಸಗಳಲ್ಲೂ ವಿಳಂಬ, ದೇಶ ಪ್ರಜಾರಾಜ್ಯ ಆದರು ಒಂದೇ ಮನೆತನದ ರಾಜಕಾರಣಿಗಳು ದೇಶದ ಎಲ್ಲೆಡೆಯಲ್ಲಿ ರಾರಾಜಿಸುತ್ತ ಇದ್ದಾರೆ... ಜನಗಳಿಗೆ ಮತದಾನ ಎಂಬುವ ಹಕ್ಕಿನ ಬಗ್ಗೆ ಆಸಕ್ತಿ ಕುಂದಿಹೂಗುವಂತೆ ಆಗಿದೆ.

ನಮ್ಮ ಭಾರತ ದೇಶ ಪ್ರಕಾಶಿಸುತ್ತಿದೆ ಎಂದು ಯಾರು ಎಷ್ಟು ಆರ್ಭಟ ಮಾಡಿದರೂ, ಪ್ರತಿ ದಿನ ವಿದ್ಯುತ್ ಕಡಿತ ದಿಂದಾಗಿ ಬೀಸಣಿಗೆಯಲ್ಲಿ ಗಾಳಿ ಬೀಸಿಕೊಂಡು, ಮೊಂಬತ್ತಿಯ ಬೆಳಕಿನಲ್ಲಿ homework ಮಾಡಿಕೊಂಡು, ಒಂದು ಬಿಂದಿಗೆ ನೀರಿಗಾಗಿ ಪರದಾಡುತ್ತ ಮಾತು ಮಾತಿಗೂ ತಮ್ಮ ಹಣೆಬರಹವನ್ನು ತೆಗಳಿಕೊಳ್ಳುತ್ತಾ ಕಾಲ ನಡೆಸುತ್ತಿರುವ ಸಾಮಾನ್ಯ ನಾಗರಿಕನಿಗೆ ಅದು ಸುಳ್ಳು ಎಂದು ಗೊತ್ತು. ಎಲ್ಲಿ ನೋಡಿದರಲ್ಲಿ ಗೋಮುಖ ವ್ಯಾಘ್ರಗಳೇ ತುಂಬಿಕೊಂಡಿರುವ ಈ ಕಾಲದಲ್ಲಿ ಯಾರನ್ನು ಚುನಾಯಿಸುವುದು?? ಯಾವ ಅಭ್ಯರ್ಥಿ ನಮ್ಮ ಕಷ್ಟಗಳನ್ನು ನೀಗಿಸಲು ಸಮರ್ಥ?? ಸಮರ್ಥ ಅಭ್ಯರ್ಥಿ ಇದ್ದರೂ ಅವನಿಗೆ ಗೆಲುವು ಖಚಿತವೆ?? ಒಂದು ವೇಳೆ ಅವನು ಗೆದ್ದನು ಎಂದೇ ಇಟ್ಟುಕೊಳ್ಳೋಣ, ಅವನು ಆಮಿಷಗಳಿಗೆ ಒಳಗಾಗದೆ ತನ್ನನ್ನು ಗದ್ದುಗೆಗೆ ತಂದ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳನ್ನೂ ನೀಗುವನೆ?? ಅವನ ಸಹಚರರು ಇಂಥ ಪಥದಲ್ಲಿ ನಡಿಯಲು ಅವನಿಗೆ ಆಸ್ಪದ ನೀಡುವರೆ?? ಈ ಪ್ರಶ್ನೆಗಳನ್ನ್ನನಾನು ಕೇಳುತ್ತಿಲ್ಲ.. ಇಂದಿನ ಸಮಾಜವೇ ಈ ಪ್ರಶ್ನೆಗಳನ್ನು ಪ್ರಸ್ತಾಪಿಸುತ್ತಿದೆ.

ತಾವು ಚುನಾಯಿಸಿದ ಪ್ರತಿನಿಧಿಗಳು ಅವರ ಸ್ವಾರ್ಥಕ್ಕೋಸ್ಕರ ನಾಡಿನ ಏಳಿಗೆಯನ್ನು ಬಲಿಪಶು ಮಾಡುತ್ತಿರುವುದನ್ನು ಕಂಡು ಕಾಣದಂತೆ ಕೂಡಬೇಕಾದ ವಿಡಂಬನೆ ಇಂದಿನ ಜಾಗೃತ ನಾಗರೀಕನದು. ದೇಶ ಇಂದೇನಾದರೂ ಸಾಧಿಸುತ್ತಿಧೆ ಎಂದಾದರೆ ಅದು ಭಾರತ ದೇಶದ ಸಾಮಾನ್ಯ ಮನುಷ್ಯನಿಂದ ಮಾತ್ರ. ನಾಡಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿರುವ ಅನಕ್ಷರಸ್ಥ ಜನತೆಯ ಅಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪೂಂಜಿಪತಿಗಳಿಗೆ ಲಗಾಮು ಹಾಕುವ ಕೆಲಸವನ್ನು ಈ ಅಸಾಮಾನ್ಯನಾದ ಸಾಮಾನ್ಯ ಮಾಡಬೇಕಿದೆ. ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದರೆ, ಅರಸರ ಕಾರಣದಿಂದ ಆರ್ಥಿಕ ಮತ್ತು ಸಾಮಾಜಿಕ ದುರ್ಗತಿಯಲ್ಲಿದ್ದ ಯಾವುದೇ ದೇಶದ ಏಳ್ಗೆಯಾಗಲಿ ಅದು ಸರ್ವೇಸಾಮಾನ್ಯ ನಾಗರಿಕ ಆ ದೇಶದ ಅರಸರ ವಿರುದ್ಧ ದಂಗೆ ಎದ್ದಾಗ ಮಾತ್ರ ಸಾಧ್ಯವಾಗಿದೆ.

ನಮ್ಮ ಭಾರತ ದೇಶವನ್ನು ಪ್ರಗತಿ ಪಥದಲ್ಲಿ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಬೇಕಾದ so called "YOUNGISTAN" ಆದ ನಾವು ದೇಶದ ಆಡಳಿತವನ್ನು ಶುಚಿ ಗೊಳಿಸಲು ಮಾಡಬಹುದಾದಂತಹ ಕಾರ್ಯವಾದರು ಏನು ಎಂದು ಒಮ್ಮೆ ಯೋಚಿಸುತ್ತಿದ್ದಾಗ ನನ್ನ ಮನಸಿನಲ್ಲಿ ಮೂಡಿದಂತಹ ಒಂದು ಚಿಂತನೆಯನ್ನು ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ.

ಬರಲಿದೆ ಭಾಗ ೨...

Thursday, January 21, 2010

The Gluttony Song

Here is my take on the song "Saari umar hum" from the movie 3idiots :o)


Saari umar hum bhooke hi mar gayee


Ek pal toh chain se khaane do khaane do


Saari umar hum bhooke hi mar gaye


Ek pal toh chain se khaane do khaane do ooo


Naa nanana nana naa nanana naa nanana nana nanannananaaaa


Give me some idlis, give me some cakes


Give me samosas I wanna eat it once again


Give me some idlis, give me some cakes


Give me samosas I wanna eat it once agaaainnnn


Oily khaane ko cholestrol ke darr ne mitaya


"Dieting karr yaar" yeh khud doston ne bataya


Count rakh rakh ke kiya crunches, dibs or push ups ko saala,


Quaker oats ne toh pura pura muh kharab kar daala


Muh ka taste gaya, aur girl friend bhi gayi


Chalo ab toh chain se khaane do khaane do


(C'mmon everyone sing wid me...)


Muh ka taste gaya, aur girl friend bhi gayi


Chalo ab toh chain se khaane do khaane doooooooo


Saari umar hum bhooke hi mar gayee


Ek pal toh chain se khaane do khaane do


Saari umar hum bhooke hi mar gaye


Ek pal toh chain se khaane do khaane do ooo


Naa nanana nana naa nanana naa nanana nana nanannananaaaa

Tuesday, January 19, 2010

The Reignited Fire...

Unless u've been living in a forest or on top of the tallest mountains u'd already know about the paryaaya festivities going on at Udupi... This Lord Krishna's abode has been bustling with activity for past one month, the most important of it being the offering of the Navarathna Ratha (A golden chariot completely encrusted with the 9 precious gems). Keep an eye on my orkut account, I'll be uploading the photos shortly.


The 3rd paryaaya of Shri Shri Sugunendra Tirtha Swamiji of Puttige Math came to an end on the 17th of Jan 2010 and Shri Shri Lakshmi vara Tirtha Swamiji of Shiroor Math took charge on morning of 18th Jan 2010. For more details on the paryaaya click here.


The night of 17th and the dawn of 18th were completely marked with cultural programs organized at every nook and corner of the temple town, flute rendering by Pravin Godkhindi and Mimicry Dayanand's show which tickled the funny bone even at 3 in the morning being the most notable ones. I wasn't lucky enough to witness both these geniuses in action as I was to come back from Bangalore only on 18th morning.


The festivities were to continue even on 18th night so I returned early from work, went to the temple to get a glimpse of the almighty, where I was Joined by Manju, Chandu and Paban. We started searching desperately for any cultural programs but found none to our despair. So we spent some time loitering around in the temple premises, had masala dosa @ the famous mitra samaj and were on our way home when Pawan's (my roomie) mobile rang. It was Anroop (alias Chethan). There was excitement in his voice, he said "Dude there's a gig going on in the field next to the temple, its by the PSYCHO GUY"!!! We took a minute to comprehend what he'd just said. Once it sank in, it was pure adrenaline rush.



If it was Raghu Dixit then we had to attend this gig. We turned around and ran towards the temple, we'd not travelled far when we could already hear the familiar voice of Raghu and the guitar jamming in the background for the song "Neene beku" from psycho.We followed the direction from where the music was coming then lo and behold, brilliant spot lights beckoned us to the location where Raghu was performing.


Once we entered the location it was pure fun, I once for all wanted to get to the front of the crowd, where all the guys were enjoying like hell :) but for some reason unknown to me Paban and Anroop were in no mood to accompany me. No sooner did the pace of the guitar pick up for the Khidki song Paban got into the groove, then started the sessions of shouting, jumping and head banging. With our antics we did manage to turn some heads towards us :D


Over all the entire evening was marvelous, I've always been attracted to the guitar both as an instrument and for its style statement. Whenever I see a performance like this the thought of learning guitar ensnares me :) this time it seems like the urge to learn it is psychotic. Yesterday's concert has reignited in me a fire that had burned out, it has brought back to me a long lost love for music and guitar. So the next time u see me don't be surprised if I am playing the guitar and singing "No one will ever love u, like I do!!!"

Tuesday, January 5, 2010

South Karnataka trip ಪುರಾಣ (ಭಾಗ ೨ )

ಬೆಳ್ಳಂ ಬೆಳಿಗ್ಗೆ ನಾಲ್ಕು ಜನರ ಮೊಬೈಲ್ಗಳು ಕೂಗಿಕೊಂಡ್ವು. ಎಲ್ರು ದಡ ಬಡ ಎದ್ದು ಬಚ್ಚಲು ಮನೆಗೆ ಹೋಗಿ ನೋಡ್ತಿವಿ ನಲ್ಲಿಯಲ್ಲಿ ಮೈ ಕೊರೆಯುವಂಥ ತಣ್ಣೀರು. ಓಡಿ ಹೋಗಿ lodge ಮಾಲಿಕನ್ನ ಎಬ್ಸಿದ್ವಿ, 5 :30 ಇಂದ ಬಿಸಿ ನೀರು ಅಂತ ಹೇಳಿ ಮಲಗಿಯೇಬಿಟ್ಟ.. ಪಾಪ ಅಭಿ ಕೊರೆಯುವ ಚಳಿಯಲ್ಲಿ ಹಾಗೆ ಸ್ನಾನ ಮಾಡಿ ಬಂದ.. ನಾನು ಒಳಗೆ ಹೋಗಿ ಒಂದು bucket ತಣ್ಣೀರು ಖಾಲಿ ಮಾಡಿ ಮತ್ತೆ ನಲ್ಲಿ ಬಿಟ್ಟಾಗ ಬಿಸಿ ಬಿಸಿ ನೀರು, "ಲೋ ಮಕ್ಳ ಬಿಸಿ ನೇರು ಕಣ್ರೋ" ಅಂತ ಕೂಗಿ ಹೇಳಿದೆ, ಎಲ್ಲರಿಗು ಸಂಭ್ರಮವೂ ಸಂಭ್ರಮ. 5 :30 ಎಲ್ರು ರೆಡಿ ಆಗಿ ಚಾ ಕುಡಿದು ತೀರ್ಥಹಳ್ಳಿ ಬಸ್ ಹತ್ತಿ ಕುಂತ್ವಿ.


ಬೆಚ್ಚಗೆ ಇದ್ದ seat ನಲ್ಲಿ ಕುಳಿತು ಎಲ್ಲರು ನಮ್ಮ earphone ಗಳನ್ನ ಕಿವಿಗೆ ಏರಿಸಿದ್ವಿ. ಅಷ್ಟೊತ್ತು ಮಲಗಿದ್ದ ಸೂರ್ಯ ನಿಧಾನಕ್ಕೆ ತನ್ನ ಕೆಂಪು ಕಣ್ಣನ್ನು (ರಾತ್ರಿ ಹೊಡೆದ ಎಣ್ಣೆ ಜಾಸ್ತಿ ಆಗಿತ್ತೇನೋ ..) ತೆರೆಯುತ್ತ ಎದ್ದೆಳತೊಡಗಿದ , ಮಲೆನಾಡಿನ ಸೂರ್ಯೋದಯದ ಸೌಂದರ್ಯವನ್ನ ನೋಡಿದರೆ ನಮ್ಮ ಕುವೆಂಪು ಏನು ಯಾರು ಬೇಕಾದರು ಕವಿಗಳಗ್ತಾರೆ. ಮೌಡ್ಯತೆಯ ಕತ್ತಲನ್ನು ಚೀರಿ, ಜಾಡ್ಯ ಎಂಬ ಮಂಜನ್ನು ನೀರಾಗಿಸಿ, ಹೊಸ ಭರವಸೆ, ಆಸೆಗಳೆಂಬ ಹಕ್ಕಿಗಳನ್ನು ಎಲ್ಲರ ಮನಗಳಲ್ಲಿ ಹಾರಿಸುತ್ತ ಇನ ಬಾಂದಳದಲ್ಲಿ ಮೇಲೆರಿದನು.


ಇಂಪಾದ ಹಕ್ಕಿಗಳ ಗಾನವನ್ನು ಕೇಳುತ್ತ ನಾನು ಹಾಗೆ ನಿದ್ರಾ ದೇವಿಯ ಮಡಿಲಿಗೆ ಜಾರಿಬಿಟ್ಟೆ. ಎದ್ದಿದ್ದು ತೀರ್ಥಹಳ್ಳಿಯಲ್ಲಿ. ಸುತ್ತ ನೋಡ್ತಿನಿ, ಮಲೆನಾಡಿನ ಎಲ್ಲ ಹಕ್ಕಿಗಳು ನಮ್ಮ ಬಸ್ ನಲ್ಲೆ ಇದ್ವು, ಹಳದಿ ಚೂಡಿದಾರ ಧರಿಸಿದ್ದ ಒಂದ್ ಹಕ್ಕಿಯಂತು ಮನ ಮೋಹಕವಾಗಿತ್ತು. ನನ್ನ ಮಿತ್ರದ್ರೋಹಿ ಸ್ನೇಹಿತರು ನನ್ನು ಎಬ್ಬಿಸದೆ ಅವರೇ ಮಜಾ ಮಾಡಿದ್ದರು :o( ಅವೆಲ್ಲ ಇವಾಗ ಯಾಕೆ ಬಿಡಿ. ಅಲ್ಲಿಂದ ಸಾಗರಕ್ಕೆ ಹೋಗಿ ತಿಂಡಿ ಮುಗಿಸಿ ಜೋಗಕ್ಕೆ ಬಸ್ ಹತ್ತಿದಾಗ ಸಮಯ 11:45 .


ಜಗತ್ಪ್ರಸಿದ್ಧ ಜೋಗ ಜಲಪಾತ, ರಾಜ, ರಾಣಿ ಮತ್ತು ರೊಕೆಟ್ ಕುಯ್ಯೋ ಮರ್ರೋ ಅಂತ ಇದ್ರು. ಟೆನ್ಶನ್ ತಗೋಬೇಡಿ, ನನ್ನ ಮಾತಿನ ಅರ್ಥ ನೀರು ಹೆಚ್ಗೆ ಇರಲಿಲ್ಲ ರೋರೆರ್ ಒಬ್ಬ ಮತ್ರ ರಾರಾಜಿಸ್ತ ಇದ್ದ. ನೀರು ಹೆಚ್ಗೆ ಇಲ್ಲದ್ದರಿಂದ ನಮಗೆ ನೀರಲ್ಲಿ ಆಟ ಆಡೋ ಹಂಬಲ ಆಗಿ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ. ಯಾತ್ರಿಕರಿಗೆ ಸಹಾಯ ಆಗ್ಲಿ ಅಂತ concrete ಮೆಟ್ಟಿಲುಗಳನ್ನ ಮಾಡಿದೆ ಸರಕಾರ, ಆದರೆ ಮುಂಚಿನ ಕಾಲು ದಾರಿಯಲ್ಲಿ ನಡಿಯೋ ಮಜಾ ಈಗ ಇಲ್ಲ. ತಮ್ಮ ಸೌಂದರ್ಯವನ್ನು ಸವಿಲು ಬಂದ ರಸಿಕರ ಜೊತೆ ರಾಜ, ರಾಣಿ, ರೋರೆರ್ ಮತ್ತು ರೊಕೆಟ್ ಮರಗಳ ನಡುವೆ ಅವಿತು ಆಡುತಿದ್ದ ಕಣ್ಣ ಮುಚ್ಚಾಲೆ ಈಗ ಇಲ್ಲ. ಎಲ್ಲಿ ನೋಡಿದರು ಪ್ಲಾಸ್ಟಿಕ್ ಹಾವಳಿ. Will we never change ??


ಎಲ್ಲರು ಕೆಳಗೆ ಇಳಿದು ನಮ್ಮ ಚೀಲಗಳನ್ನ ಒಂದು ಬಂಡೆಯ ಮೇಲೆ ಗುಡ್ಡೆ ಹಾಕಿ ನೀರಿಗೆ ಧುಮುಕಿದೆವು. ಈಜು ಬಾರದೆ ಇದ್ದರೆ ಜೋಗದಲ್ಲಿ ಜಾಸ್ತಿ risk ತೆಗೆದುಕೊಳ್ಳಬಾರದು. ಎಲ್ಲ ಬಂಡೆಗಳು ಪಾಚಿ ಕಟ್ಟಿ ತುಂಬಾ ಜಾರಿಕೆ, ಅದು ಅಲ್ಲದೆ sudden ಆಗಿ ಆಳ ಇರೋದ್ರಿಂದ ಬಂಡೆಗಳಿಗೆ ಒರಗಿಕೊಂಡೆ ಆಟ ಆಡಿ ವಾಪಾಸ್ ಬರಬೇಕಾಯಿತು. ಹಿಂದಿರುಗುವಾಗ 1700 odd ಮೆಟ್ಟಿಲುಗಳನ್ನ ಹತ್ತುವುದೇ ಒಂದು ದೊಡ್ಡ ಸಾಹಸ. ನನ್ನ ಕಾಲುಗಳು ನನ್ನ ಭಾರದ ಜೊತೆಗೆ ನನ್ನ ಬ್ಯಾಗ್ ಭಾರವನ್ನು ಹೊರಲಾರದೆ ಸೋತು ಹೋದವು. ಕೊನೆಗೆ ಅಭಿ ನನ್ನ ಬ್ಯಾಗ್ ಹೊತ್ತುಕೊಂಡು ಬಂದ (Thanx abhi). ಅಂತು ಇಂತೂ ಮೇಲೆ ಬಂದು ಸಾಗರಕ್ಕೆ ವಾಪಾಸ್ ಆದೆವು. ಅಲ್ಲಿಂದ ರಾತ್ರಿ ಎಂಟಕ್ಕೆ ಬಸ್ ಹಿಡಿದು ಉಡುಪಿ ಗೆ ಬಂದು ತಲುಪುವಾಗ ರಾತ್ರಿ 1 ಘಂಟೆ ಆಗಿತ್ತು. ಜನವರಿ ಯಲ್ಲಿ ಮತ್ತೊಂದು ಟ್ರಿಪ್ ಹೋಗೋಣವೆಂದು ಮೆಸೇಜ್ ಮಾಡಿ ಎಲ್ಲರು ಮಲಗಿದೆವು.

Monday, January 4, 2010

South Karnataka trip ಪುರಾಣ (ಭಾಗ ೧ )

ಶುಕ್ರವಾರ ಮಧ್ಯಾನ ಆಫೀಸಿನಲ್ಲಿ ಕುಂತು ತೂಕಡಿಸ್ತಾ ಇದ್ದೆ, ಅದೆಲ್ಲಿಂದಲೋ ಬಂದ mail ಟಿಂಗ್ ಅಂತ ಶಬ್ದ ಮಾಡ್ತಾ ನನ್ನ ಗಮನ ಸೆಳೆಯಿತು. ಥೂ!! ಯಾರಿದು ಅಂತ ಬೈಕಂಡು ಓಪನ್ ಮಾಡಿ ನೋಡ್ತೀನಿ ಸದಾನಂದ ತೆಗ್ಗಿ "weekend" ಅಂತ ಸಬ್ಜೆಕ್ಟ್ ಹಾಕಿ ಮೇಲ್ ಮಾಡಿದ್ದ.. ಸ್ವಲ್ಪ ಮಂಪರಿನ ತೆರೆ ಸರಿದಂತಾಗಿ ಏನಿದು ಅಂತ ನೋಡಿದೆ, ಅದೊಂದು ವೀಕೆಂಡ್ ಟ್ರಿಪ್ invite ಆಗಿತ್ತು... ತಕ್ಷಣ reply ಗಳ ಸುರಿಮಳೆ... ಕೆಲವರು ಹ್ಞೂ ಅಂದ್ರು ಇನ್ನು ಕೆಲವರು ಇಲ್ಲ busy ಅಂದ್ರು.. ಅಂತು ಇಂತೂ 4 ಜನದ ಗುಂಪು ತಯಾರು ಆಗೆಬಿಟ್ಟಿತು.. ಎರಡು ದಿನದಲ್ಲಿ ಶೃಂಗೇರಿ ಮತ್ತೆ ಹೊರನಾಡು cover ಮಾಡೋ ಪ್ಲಾನ್ ಮಾಡಿದೆವು, ಅಷ್ಟರಲ್ಲಿ ಸಂತೋಷ "ಲೇ ಶಿಷ್ಯ ಬರಿ ತೀರ್ಥ ಯಾತ್ರೆ ಆಗುತ್ತಮ್ಮ ಸ್ವಲ್ಪ ಮಜನೂ ಮಾಡೋಣ, ಇನ್ನೊಂದು ಜಾಗ ಹೇಳ್ರೂ " ಅಂದ. ಅದಕ್ಕೆ ನಾನು ಸರಿ ಶಿವ ಒಂದು ದಿನದಲ್ಲಿ ತೀರ್ಥ ಯಾತ್ರೆ ಮುಗಿಸಿ ಭಾನ್ವಾರ ಜೋಗಕ್ಕೆ ಹೋಗ್ಬಿಡೋಣ ಅಂದೆ, ಎಲ್ಲರೂ ಬಹಳ exited ಆಗಿ ಸೂಪರ್ ಮಗ marvellous plan lets do it ಅಂದೆಬಿಟ್ಟರು.


ತುಂಬಾ ಹೊತ್ತು discussion ಆದಮೇಲೆ ಆದಷ್ಟು ದಾರಿಯನ್ನ ರಾತ್ರಿ ನೆ ಕ್ರಮಿಸಿಬಿಡೋಣ ಅಂತ decide ಮಾಡಿ ಶಿವಮೊಗ್ಗಕ್ಕೆ ಹೋಗುವ ರಾಜಹಂಸ ಹತ್ತಿ ಮಲಗಿಬಿಟ್ವಿ... ಇಲ್ಲಿ ಒಂದು ಮಜವಾದ ವಿಷಯ ಏನಂದ್ರೆ ನಾವುಗಳು ಹೊರಟಿದ್ದು ಉಡುಪಿ ಇಂದ, ನಮ್ಮ ಸೌತ್ ಕರ್ನಾಟಕ ಟ್ರಿಪ್ ಇಲ್ಲಿಂದ ಪ್ರಾರಂಭ.. :o)


ಮುಂಜಾನೆ 4 ಘಂಟೆಗೆ ಸರಿಯಾಗಿ ಶಿವಮೊಗ್ಗ ಲಿ ನಮ್ಮನ್ನ ಹೊತ್ತಾಕಿ ರಾಜಹಂಸ ದಾವಣಗೆರೆಯತ್ತ ಹಾರಿಹೋದ, ಅಷ್ಟು ಹೊತ್ತಿನಲ್ಲೂ ಶಿವಮೊಗ್ಗ ಬಸ್ ಸ್ಟ್ಯಾಂಡ್ ನಲ್ಲಿ ರಶ್!!! ಸರಿ ಇನ್ನು ಶೃಂಗೇರಿ ಬಸ್ ಹುಡುಕುವ ಕೆಲಸ. ಯಾರನ್ನ ತಡಕಿ ಕೇಳಿದರು ಎಲ್ಲರು ಒಂದು ಮೂಲೆಯನ್ನು ತೋರಿಸಿ ಅಲ್ಲಿ ನಿಲ್ಲಿ ಬರುತ್ತೆ ಅಂತ ಹೇಳುತ್ತಿದ್ದರು. ಶಿವಮೊಗ್ಗ ಬಸ್ ಸ್ಟ್ಯಾಂಡ್ ಮುಂದೆ ಇರುವ ಅಶೋಕ ಪಿಲ್ಲರ್ ಸುತ್ತ ನಾಲ್ಕು ಬಾರಿ ಸುತ್ತಿದ ಮೇಲೆ ಯಾರು ಸರೀಗೆ ಹೇಳ್ತಾ ಇಲ್ಲ ಅಂತ ನಮಗೆ ಅರಿವಾಗಿದ್ದು. ನಾನು ಬೆಂಗಳೂರಿಂದ ಬಂದಿದ್ದು ನೋಡಿ.. ಇಂಥವು ತುಂಬಾ ಅಭ್ಯಾಸ ಆಗಿದೆ, ಅಲ್ಲೇ ಹತ್ತಿರದಲ್ಲಿ ಇದ್ದ ಒಂದು ಚಾ ಗಾಡಿ ಹತ್ತಿರ ಹೋಗಿ ನಾಲ್ಕು ಚಾ ಹೇಳಿದೆ, ಬಿಸಿಬಿ ಬಿಸಿ ಚಾ ಕುಡಿಯುತ್ತ ಅಂಗಡಿಯ ಹುಡುಗನ್ನ "ಗುರು ಇಲ್ಲಿ ಶೃಂಗೇರಿ ಕಡೆ ಬಸ್ ಎಲ್ಲಿ ಬರುತ್ತಮ್ಮ ??" ಅಂದ ಕೂಡಲೇ ಪಟ ಪಟ ಅಂತ ಹೇಳ ತೊಡಗಿದ :o) ಅಲ್ಲೇ ಎದುರಿಗಿದ್ದ ಬಸ್ ಸ್ಟ್ಯಾಂಡ್ ಲಿ 4:45 ಗೆ ಮೊದಲ ಬಸ್.


ಶೃಂಗೇರಿ ಕಡೆ ಬಸ್ ಹೊರಟಂತೆ ಚಳಿ ಹೆಚ್ಚಿತು, ಹಿಮ ಎಲ್ಲೆಡೆ ಬೆಳ್ಳನೆಯ ಸೆರಗನ್ನು ಹೊಚ್ಚಿ ಇಡೀ ಜಗತ್ತನ್ನೇ ತನ್ನ ಮಡಿಲಿನಲ್ಲಿ ಮಳಗಿಸಿಕೊಂಡಂತೆ ಇತ್ತು. ನಮ್ಮ driver ಮಲಗದೆ ಇದ್ರೆ ಸಾಕು ಅನ್ನೋ ಭಯ ನು ಇತ್ತು ಬಿಡಿ, ಮಲೆನಾಡಿನ ಸೌಂದರ್ಯ ವನ್ನ ಸವಿಯುತ್ತ ಹಾಗೆ ನಿದ್ದೆ ಹೋದ್ವಿ.


ಎಷ್ಟು ಹೊತ್ತು ಮಲಗಿದವೋ ನೆನಪಿಲ್ಲ. ಇಡೀ journey ಕರೆಂಟ್ ಹೊಡೆದ ಕಾಗೆ ಥರ ಕುಳಿತಿದ್ದ ಅಭಿಲಾಷ ಯಾಕೋ ಕಿಟಾರ್!!! ಎಂದು ಕೂಗಿದಂತೆ ಅನ್ನಿಸಿತು, ಎಲ್ಲರು ಎದ್ದು ನೋಡುತ್ತೇವೆ ಅವನ ಮುಖದಲ್ಲಿ ಒಂದು ರೀತಿಯ ಶಾಕ್ ಇತ್ತು. ಕಿಟಿಕಿಯತ್ತ ಕೈ ಮಾಡಿ "just look at this dude" ಅಂದನು... ಅವನ ಕೈ ಒಂದು ಹಸಿರು ಬೋರ್ಡ್ ಕಡೆ ತಿರುಗಿತ್ತು, ಅದರ ಮೇಲೆ ಬೆಳ್ಳಗೆ ಫಳ ಫಳ ಹೊಳೆಯುವ radium sticker ಲಿ "MANGALORE 105 KMS" ಅಲ್ಲಿಂದ ಶೃಂಗೇರಿ ಮುಟ್ಟುವ ವರೆಗೂ ನಿದ್ದೆ ಬರಲಿಲ್ಲ. ನಾವು ಶೃಂಗೇರಿ ಲೇ ಇದ್ದ್ವಿ ಅನ್ನೋದು ಬೇರೆ ಮಾತು.


ಹೌದು ಅಭಿ ಯಾಕೆ ಸುಮ್ನಿದ್ದ ಅಂತ ಹೇಳೋದು ಮರೆತೆ. ಅವನು ಕೇರಳ ದವನಾದ್ದರಿಂದ ಅವನಿಗೆ ಕನ್ನಡ ಅರ್ಥ ವಾದರೂ ಮಾತಾಡೋದು ಸ್ವಲ್ಪ ಕಷ್ಟ ಆಗ್ತಾ ಇತ್ತು. ಜೋಗಕ್ಕೆ ಹೋಗೋ ಬಸ್ ನಲ್ಲಿ ಹುಡುಗೀರು ಹತ್ತಿದಕ್ಷಣ ಮಾತಾಡೋಕ್ಕೆ ಶುರು ಮಾಡಿದ.


ಶೃಂಗೇರಿಲೇ ಒಂದು ರೂಂ ಮಾಡಿ.. ಮೊದಲು ಶಾರದ ದೇವಿ ದರ್ಶನ ಮಾಡಿ ಹೊರನಾಡಿಗೆ ಹೋಗ್ಬಂದ್ವಿ.. ರಾತ್ರಿ ಎಲ್ರು ಮೊಬೈಲ್ ಲಿ 4 ಘಂಟೆ ಗೆ alarm ಇಟ್ಟು... ತೆಗ್ಗಿ ಗೆ ಎಲ್ರುನ್ನು ಎಬ್ಬಿಸೋ responsibility ಹೊರಿಸಿದ್ವಿ...


ಬರಲಿದೆ ಭಾಗ ..

Tuesday, December 29, 2009

ಹೇಳಿ ಹೋಗು ಕಾರಣ, ಹೋಗುವ ಮೊದಲು...






C.ಅಶ್ವಥ್








29 december 1939 - 29 december 2009

C . ಅಶ್ವಥ್ ಅವರನ್ನು ಕನ್ನಡ ಸುಗಮ ಸಂಗೀತದ ಮೇರು ಪರ್ವತ ಎಂದು ಕರೆದರೂ ತಪ್ಪು ಆಗಲಾರದು.. ಅಂತಹ ಒಂದು ಮಹಾನ್ ಚೇತನವನ್ನು ಕಳೆದುಕೊಂಡು ಇಂದು ನಮಗೆ ಭರಿಸಲಾಗದಂತಹ ನಷ್ಟವಾಗಿದೆ.. ಕನ್ನಡದ ಮಹಾನ್ ಕವಿಗಳ ಕಾವ್ಯಗಳಿಗೆ ರಾಗದ ರೂಪದಲ್ಲಿ ಜೀವತುಂಬಿ ಎಲ್ಲರ ಮನಮುಟ್ಟುವಂತೆ ಹಾಡುವಂಥ ಇವರ ಶೈಲಿ ಬಹಳ ಅನುಪಮ ಹಾಗು ಅಪೂರ್ವ.. ಅವರ ದೇಹ ಇಂದು ನಮ್ಮ ಮಧ್ಯ ಇಲ್ಲದಿದ್ದರೂ ಅವರು ತಮ್ಮ ಹಾಡುಗಳ ಮೂಲಕ ಕನ್ನಡ ಅಭಿಮಾನಿಗಳ ಎದೆಯಲ್ಲಿ ಚಿರಂತನವಾಗಿ ಉಳಿಯುತ್ತಾರೆ..

Tuesday, September 1, 2009

1st Anniversary

Last year I had left home, my beloved parents and friends to pursue my career, my dreams which I hoped would materialize one day. Had to make a lot of sacrifices and go through a lot of hardships. Today I've completed my first year as professional, which brings back to me the memories from my college and school days.. Those wonderful days that I had spent with you.. One thing that I would like to tell you is.. Thank you.. I would not have made this without you.. :o)

As far as my dreams and fancies are concerned... Well they never stop do they?? :o)

The other day I was sitting at home and pondering over some abstract thought that had been troubling me for quite a long time... As history has it India has been a hub of knowledge, education, culture and heritage from time immemorial. Our contribution towards the development of the entire world has been monolithic.

It was in India that one of the world's oldest and most sophisticated civilizations arose, it was here that one of the oldest languages ever to be spoken on the earth the "Samskritha " originated. Our contribution to the world of mathematics and astronomy has been astounding. Recent discoveries have showed that the stealth material about which the entire world is going gung-ho about was developed in India using herbs... Well the list never ends...

Today's India is known to the outside world as a land of snake charmers, it's known for its poverty, illiteracy, ignorance and of course cheap labour. Please don't feel that I am complaining... Is'nt it high time that we introspect. What the hell went wrong, due to which such a rich civilization is in shambles today.

According to me the greatest problems of modern India is its religious biasing. Until and unless our hearts are cleared of this infestation, until every person in India sees himself as a citizen of India first and then as a person belonging to some religion we will never be able to work together towards the upliftment of the nation.

The second problem is the negligent attitude towards what is ours. We are always fascinated towards the clean roads, high rise buildings, wonderful infrastructures and spanking new public transport that the west has, but do we realize the role that every citizen plays in keeping them the way they are. Do we ever bother to give something back to the country that has given us so much??

We the young generation are hell bent upon mocking the western civilization without even realizing that the main route to development lies in realizing our roots...

In an effort to make sure this happens I have taken an oath that I'll be making one new entry to the blog every week that will tell us something new about our wonderful nation and help in uplifting our downtrodden self respect.

Let's join hands in giving something back to the nation... JAI HIND!!!!